ಬೋಧಿವೃಕ್ಷದ ಬಂಧು

ಬುದ್ಧ ನೀ ಎದ್ದಾಗ
ಜಗವೆಲ್ಲ ಮಲಗಿತ್ತು
ಶಾಂತಚಿತ್ತದಿ ನಡೆದೆ
ಧೀರ ನಡಿಗೆಯಲಿ
ಕಾಮಕ್ರೋಧ ಮೋಹಗಳ ಧಿಕ್ಕರಿಸುತ

ಮಹಾ ಮಾನವ ನೀನಾಗುತ
ಕತ್ತಲಲಿ ನೀ ನಡೆದರೂ
ಪ್ರಕಾಶ ಚೆಲ್ಲುತ ಕತ್ತಲು ಓಡಿಸಿದಿ

ಅಂದು ಜಗದಳಲು ತಣಿಸಲು
ಕನವರಿಸುತ ಕಾಯುತ್ತಿತ್ತು ಜಗವು
ನಿನ್ನ ಬರುವಿಗಾಗಿ…

ವರ್ಣ ಪದ್ಧತಿಯ ಭಾರಕ್ಕೆ
ಬಳಲಿ ಬೆಂಡಾಗಿದ್ದ ಸಮಾಜ
ನಿನ್ನ ಸಮತೆ ಸರಳತೆಗೆ ಬಾಯಿ ತೆರೆದಿತ್ತು

ಮೌನ ಧ್ಯಾನಗಳ ಶಾಂತಮೂರ್ತಿಯಾಗಿ
ಜಗದ ಮನವ ಮೋಡಿ ಮಾಡಿ
ಶಾಂತಿ-ಅಹಿಂಸೆಗಳ ಹರಿಕಾರ ನೀನಾದಿ

ಬೋಧಿವೃಕ್ಷದ ನೆರಳು
ನೀನೆ ನೀನಾಗಿ ಮನುಕುಲಕೆ
ಬುದ್ಧಂ ಶರಣಂ ಗಚ್ಫಾಮಿ
ಶರಣಂ ಸಂಘಂ ಗಚ್ಫಾಮಿ ದಾರಿದೀಪವಾದೆ

ಬುದ್ಧನೆಂದರೆ ಎದ್ದವ
ಭವ ಭಾವಗಳ ಗೆದ್ದವ
ಕಾಲನುದರದೊಳಗೆ ಬೆಳೆದ ಕಮಲವದನ
ಬೋಧಿವೃಕ್ಷ ಬಂಧು, ಮರಳುಗಾಡಿನ ಸಿಂಧು

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವಳು ಬಂದಾಗ
Next post ಕುರಿಮರಿ ಮತ್ತು ಕಟುಕ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys